ನೆತ್ತಿಯಲ್ಲಿ ಗಿರಿಛತ್ರಿಯನೆತ್ತಿದ ಶಕ್ತಿ

ನೆತ್ತಿಯಲ್ಲಿ ಗಿರಿಛತ್ರಿಯ ಎತ್ತಿದ
ಶಕ್ತಿಗಿದೋ ನಮನ,
ಸುತ್ತಲು ಸಾಗರವಸ್ತ್ರವ ಧರಿಸಿದ
ಭರ್ತೆಗಿದೋ ನಮನ;
ಕೋಟಿ ಕೋಟಿ ಕಣ್‌, ಕೋಟಿ ಕೋಟಿ ಕೈ
ತಾಳಿ ನಿಂತರೂನು
ಸಾಟಿಯಿಲ್ಲದಾ ಏಕರೂಪಾದ
ತಾಯಿಗಿದೋ ನಮನ.

ಮರಗಿಡ ಆಡಿ ತೀಡುವ ಗಾಳಿಯ
ಪರಿಮಳ ನಿನ್ನುಸಿರು,
ನೀ ಧರಿಸಿರುವ ಪೀತಾಂಬರಗಳು
ಶಾಲಿವನದ ಹಸಿರು;
ಹಗಲಲಿ ಸೂರ್ಯ ಇರುಳಲಿ ಚಂದ್ರ
ನಿನ್ನ ಹಣೆಯ ತಿಲಕ,
ಎಂಥ ಶ್ರೀಮಂತ ರೂಪ ನಿನ್ನದೇ
ನೋಡಿ ನನಗೆ ಪುಲಕ!

ಸಾವಿರ ಧಾರೆಗಳಾದರು ಒಂದೇ
ಸಾಗರ ನಮ್ಮ ಗುರಿ,
ಸಾವಿರ ರೇಶಿಮೆ ಎಳೆಗಳು ಸೇರಿದ
ಪತ್ತಲ ನಮ್ಮ ಸಿರಿ;
ನೂರು ಶಕ್ತಿಗಳ ಸುಂದರ ಸಂಗಮ-
ಸಂಸ್ಕೃತಿ ಈ ನಾಡು,
ಒಟ್ಟುಗೂಡಲು ನಾಡಿನ ದುಡಿಮೆಗೆ
ನಮಗೆ ಯಾರು ಈಡು?

ಕೈ ಕೈ ಸೇರಿಸಿ ನಗುತ ನಿಲ್ಲೋಣ
ತಾಯ ಸುತ್ತ ನಾವು,
ಅವಳ ಪಾಲನೆ ರಕ್ಷಣೆಗಾಗಿ
ಎದುರಿಸೋಣ ಸಾವು;
ಎಲ್ಲ ದೇವರಿಗು ಹಿರಿಯದೇವಿ ಈ
ತಾಯಿಯ ವೈಭವಕೆ
ಎಲ್ಲ ಭೇದಗಳ ಚೆಲ್ಲಿ ಬಾಳೋಣ
ಬೇರ ಪೂಜೆ ಯಾಕೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಾಹ
Next post ಗುಡಿಸಲು-ಮಹಲು

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys